Wednesday, September 1, 2010

ಶ್ರೀ ಕೃಷ್ಣಾರ್ಪಣಮಸ್ತು....


ಅಂಬೆ ಕಾಲಿಕ್ಕುತ ಬಂದ
ಕೈಯ್ಯಲಿ ಕೊಳಲು ನೋಡಲು ಚೆಂದ
ಉಟ್ಟಿಹ ಪೀತಾಂಬರ ಅಂದವೋ ಅಂದ
ಇವನೇ ನಮ್ಮ ಬಾಲ ಮುಕುಂದ...
     
      ಶಿರದಲಿ ಶೋಭಿಪ ನವಿಲುಗರಿ
      ನೀಲ ವರ್ಣ ನಮ್ಮ ಮುರಾರಿ
      ಹಣೆಯಲಿ ತಿಲಕ ಕಾಲಲಿ ಗೆಜ್ಜೆ
      ಬರುವನು ಇಟ್ಟು ಪುಟ್ಟ ಹೆಜ್ಜೆ... 

ನವನೀತ ಚೋರ ಈ ಪುಟ್ಟ ಪೋರ
ಮಾಡುವ ಮೋಡಿಯ ತುಂಟ ಕುಮಾರ
ದೇವಕಿ ಯಶೋಧರ ಮುದ್ದಿನ ಕುವರ
ಬಾಲ ಲೀಲೆಯು ಇವನದತಿ ಮಧುರ...
     
      ಕೃಷ್ಣ ಗೋವಿಂದ  ಗೋಪಾಲನು ಇವನೆ
      ಭಕ್ತಿಲಿ ಬೇಡಲು ತೋರುವ ಕರುಣೆ...
      ಮಾಡುವ ಇವನ ದಿನವು ಸ್ಮರಣೆ
      ಪರಿಹರಿಸುವ ಇವ ನಮ್ಮಯ ಬವಣೆ...

ಹರೇಕೃಷ್ಣ  ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
       || ಶ್ರೀ ಕೃಷ್ಣಾರ್ಪಣಮಸ್ತು....||

34 comments:

  1. ಕೃಷ್ಣನ ಕವನ ಅವನಷ್ಟೇ ಸುಂದರ!

    ReplyDelete
  2. ಚಂದಾಗಿದೆ ಕವನ, ಜನ್ಮಾಷ್ಟಮಿ ಶುಭಾಶಯ , ಆದಷ್ಟು ಬೇಗ ಪುಟ್ಟ ಕೃಷ್ಣ ಬರಲಿ ನಿಮ್ಮ ಬಾಳಲಿ.

    ReplyDelete
  3. ಧನ್ಯವಾದಗಳು ಮೂರ್ತಿ ಸರ್...

    ReplyDelete
  4. ಧನ್ಯವಾದಗಳು ಪರಾಂಜಪೆ ಸರ್... ನಿಮಗೂ ಜನ್ಮಾಷ್ಟಮಿ ಶುಭಾಶಯಗಳು ...

    ReplyDelete
  5. ಕವನ ರಾಶಿ ಚೊಲೋ ಇದ್ದು..

    ReplyDelete
  6. ಪ್ರಗತಿ ಮೇಡಮ್,
    ತುಂಬಾ ಚೆನ್ನಾಗಿ ಬರೆದಿದ್ದೀರಿ....... ನಿಮಗೂ ಹಬ್ಬದ ಶುಭಾಶಯ..

    ReplyDelete
  7. ಧನ್ಯವಾದಗಳು ದಿನಕರ ಸರ್...

    ReplyDelete
  8. ಕವನ ಮಧುರವಾಗಿ ಸು೦ದರವಗಿ ಮೂಡಿದೆ. ಕೃಷ್ಣಜನ್ಮಾಷ್ಠಮಿಯ ಶುಭಾಶಯಗಳು.

    ReplyDelete
  9. ಹಡೆದರೆ ಹಾಡಲು ಬರುವ ಕವನ ಹಡೆಯ ಬೇಕೆಂಬುದು ನನ್ನ ಬಯಕೆ, ನೀವೂ ಹಡೆದಿರಿ ಸದ್ಯಕ್ಕೆ ಹಾಡುವ ಚಂದದ ಕವನ! ಮುಂದೆ ಹಡೆಯಿರಿ ಕೃಷ್ಣನಂಥಾ ಮುದ್ದು ಮಗನ!ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

    ReplyDelete
  10. ಮುದ್ದುಕೃಷ್ಣನ ಚೆ೦ದದ ಕವನ..
    ಸ೦ತಸಗೊ೦ಡಿತು ಎಲ್ಲರಾ ಮನ
    ಮಾಡುವೆ ಕೃಷ್ಣಗೆ ನನ್ನಯ ನಮನ.

    ಕೃಷ್ಣಾಷ್ಟಮಿಯ ಶುಭಾಶಯಗಳು.

    ReplyDelete
  11. ತುಂಬ ಮಧುರವಾದ ಹಾಗು ಗೇಯವಾದ ಗೀತೆ.
    ಕೃಷ್ಣಾಷ್ಟಮಿಯ ಶುಭಾಶಯಗಳು.

    ReplyDelete
  12. ಪ್ರತಿಕ್ರಿಯಿಸಿದ ಸೀತಾರಾಮ್ ಸರ್ ಗೆ ನಮನಗಳು....

    ReplyDelete
  13. ವಂದನೆಗಳು ಭಟ್ ಸರ್.... ಒಂದು ಕೋರಿಕೆ, ಮೊದ್ಲು ಪುಟ್ಟ ಗೌರಿ ಬರಲಿ ಅಂತ ಹರಸಿ ಸರ್ ;-) ...

    ReplyDelete
  14. ಕವನದೊಂದಿಗೆ ಪ್ರತಿಕ್ರಿಯಿಸಿದ ಮನಮುಕ್ತಾ ಮೇಡಂ ಗೆ ಧನ್ಯವಾದ...

    ReplyDelete
  15. ಧನ್ಯವಾದಗಳು ಸುನಾಥ್ ಸರ್...

    ReplyDelete
  16. nimgoo krishnashtamiya shubbashayagalu. SriKrishnana eshtu varnisidaroo saaladu... kavana chennagide.
    thanks.

    ReplyDelete
  17. ಚಂದ್ರು ಅವರಿಗೆ ಧನ್ಯವಾದಗಳು...

    ReplyDelete
  18. ಚಂದದ ಕೃಷ್ಣನಿಗೆ
    ಚಂದದ ಕವನ
    ಚಂದವಾಗಿದೆ :)

    ReplyDelete
  19. ಧನ್ಯವಾದಗಳು ದೊಡ್ಡಮಂಜುಅವರಿಗೆ... ಆಗಾಗ ಚಿತ್ತಾರಕ್ಕೆ ಬರುತ್ತಿರಿ ...

    ReplyDelete
  20. ನ೦ದನ ನ೦ದಗೆ ಎಷ್ಟು ಸ್ತುತಿಸಿದರೂ ಆನ೦ದವೇ..
    ಮನಮೋಹಕ ಚಿತ್ರ, ಮನತು೦ಬಿಸಿದ ಚಿತ್ರಣ..
    ಧನ್ಯವಾದಗಳು.. ಪ್ರಗತಿ..

    ಅನ೦ತ್

    ReplyDelete
  21. ಎಷ್ಟು ಚೆನ್ನಾಗಿ ಬರದ್ಯೇ ಪ್ರಗತಿ...ಹಿಂಗೆ ಬರೀತಾ ಇರು!!

    ReplyDelete
  22. ಪ್ರಗತಿ ಕವನ ಸೊಗಸಾಗಿದೆ.ಇಷ್ಟ ಆಯ್ತು.

    ReplyDelete
  23. ಅನಂತಾನಂತ ಕೃಷ್ಣನ ಕವನವನ್ನು ಇಷ್ಟಪಟ್ಟಿರುವ ಅನಂತ್ ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು...

    ReplyDelete
  24. ಥ್ಯಾಂಕ್ಸ್ ಸುಮನಕ್ಕ... ಚಿತ್ತಾರಕ್ಕೆ ಸ್ವಾಗತ... ಪ್ರೋತ್ಸಾಹ ಹಿಂಗೇ ಇರ್‍ಲಿ...

    ReplyDelete
  25. ಕವನವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ ಶಶಿ ಚಿಕ್ಕಿಗೆ ಧನ್ಯವಾದ... ಆಗಾಗ ಬಂದು ಪ್ರೋತ್ಸಾಹಿಸಿ...

    ReplyDelete
  26. madam, mudhu krishna edhdhu baruva hagidhe ee kavana.
    nanna blogge banni

    ReplyDelete
  27. ಚಿತ್ತಾರಕ್ಕೆ ಸ್ವಾಗತ Badarinath ಅವರಿಗೆ ... ಆಗಾಗ ಬರುತ್ತಿರಿ ... ಧನ್ಯವಾದಗಳು..

    ReplyDelete
  28. ಥ್ಯಾಂಕ್ಸ್ ವನಿತಾ ಅವರಿಗೆ... ಹಬ್ಬ ಸುಮಾರ್ ಜೋರಾಗೆ ಆಯ್ತು... ಆಗಾಗ ಬರುತ್ತಿರಿ...

    ReplyDelete
  29. ಧನ್ಯವಾದಗಳು ಮಹೇಶ್ ಅವರೇ...

    ReplyDelete