Friday, September 21, 2018

ರಂಗವಲ್ಲಿ

ಚುಕ್ಕಿಯದುವೆ ಕೈಯ ತಪ್ಪಿ
ಹೆಚ್ಚುಕಡಿಮೆಯಾಗಿದೆ
ಎಳೆದ ಗೆರೆಯು ಮೇಲೆ ಹೋಗಿ
ರಂಗವಲ್ಲಿ ಕೆಟ್ಟಿದೆ..

ಗಾಳಿ ಬಿರ್ರನೆಂದು ಬೀಸಿ
ಪುಡಿಯು ಹಾರಿ ಹೋಗಿದೆ
ಬಣ್ಣ ಹಾಕುವಾಸೆಯು
ಮನದಿ ದೂರವಾಗಿದೆ..

ರಂಗವಲ್ಲಿ ಅಳಿಸಲಾರೆ
ಬೇರೆದೊಂದ ಹಾಕಲಾರೆ
ಮನವು ಕರಡಿ ಹೋಗಿದೆ
ಆಸೆ ಚಿರುಟಿ ಕರಟಿದೆ..

ಮಳೆಯು ಬಂದು ರಂಗವಲ್ಲಿ
ತಾನೆ ಅಳಿಸಿ ಹೋಗಲಿ
ನಾಳೆ ಬೇರೆ ಬಣ್ಣ ಬೆರೆಸಿ
ಹಾಕುವಾಗ ಖುಷಿಯ ನೀಡಲಿ..

ಮನವು ತಾನೆ ತಾನಾಗಿ
ಸಮಾಧಾನ ಹೊಂದಲಿ
ಹೊಸತು ಹುರುಪಿನಿಂದ
ದಿನವು ಶುಭವಾಗಲಿ ..